Tag: ವೈಶಾಖ

April 28, 2018 / / Articles

ಜಲಸ್ಥಂ ವಿಷ್ಣು, ಡೋಲಸ್ಥಂ ಕೃಷ್ಣಂ, ರಥಸ್ಥಂ ಕೇಶವಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ ಎಂದು ಹಿರಿಯರು ಹೇಳಿದ್ದಾರೆ. ಕೇಶವನ ರಥೋತ್ಸವವನ್ನೂ ಕೃಷ್ಣನ ತೊಟ್ಟಿಲು ಸೇವೆಯನ್ನೂ ನಾವು ಅನೇಕ ಕಡೆ ನೋಡಿದ್ದೇವೆ. ಆದರೆ ಜಲಶಾಯಿಯಾದ ನಾರಾಯಣನನ್ನು ನೋಡಿರುವವರು ಕಡಿಮೆ. ಕೇವಲ ಭಾಗ್ಯಶಾಲಿಗಳಷ್ಟೇ ನೋಡಲು ಸಾಧ್ಯ. ಯಾಕೆಂದರೆ ಜಲನಾರಾಯಣನ ಗುಡಿಯು ಇರುವುದು ನೇಪಾಳದಲ್ಲಿ. ಅಲ್ಲಿಗೆ ಎಲ್ಲರೂ ಹೋಗಲಾಗುವುದಿಲ್ಲ ಅಲ್ಲವೇ!? ಚಿಂತೆ ಬೇಡ. “ಸುಲಭಪೂಜೆಯ ಮಾಡಿ ಬಲವಿಲ್ಲದವರು” ಎಂಬ ದಾಸರ ಮಾತನ್ನು ನೆನೆಸಿಕೊಳ್ಳೋಣ. ಕೆಳಗೆ ಕೊಟ್ಟಿರುವ ಸರಳ ಕ್ರಮಗಳನ್ನು ಅನುಸರಿಸಿ ಭಕ್ತಿಯಿಂದ, ಆದಷ್ಟೂ ಅನುಸಂಧಾನಪೂರ್ವಕವಾಗಿ ಪೂಜಿಸೋಣ. ದೇವನು ಖಂಡಿತವಾಗಿಯೂ ಪ್ರೀತನಾಗುವನು. ಎಷ್ಟು ಸುಲಭವಾದ ಪೂಜೆ ನೋಡಿ ಇದು.