Tag: articles

February 15, 2022 / / Kshetragalu

ಶುಕಾಚಾರ್ಯರಿಂದಲೇ ಮೊಟ್ಟಮೊದಲ ಭಾಗವತ ಸಪ್ತಾಹವು ನಡೆದ ಕ್ಷೇತ್ರಕ್ಕೆ ಈಗ ಶುಕಸ್ಥಲ ಎಂದೇ ಹೆಸರು. ಇದು ಇಂದಿನ ಉತ್ತರಪ್ರದೇಶದಲ್ಲಿದೆ. ದೆಹಲಿಯಿಂದ ಹರಿದ್ವಾರಕ್ಕೆ ಹೋಗುವಾಗ ಮುಜಫ್ಫರಪುರ ಎಂಬ ಜಿಲ್ಲಾ ಕೆಂದ್ರವು ಸಿಗುತ್ತದೆ. ಶುಕಸ್ಥಲವು ಈ ಜಿಲ್ಲೆಗೆ ಸೇರಿರುವ ಒಂದು ಪಟ್ಟಣ. ಹರಿದ್ವಾರದಿಂದ ದಕ್ಷಿಣಕ್ಕೆ ಸುಮಾರು 90 ಕಿ.ಮೀ ದೂರದಲ್ಲಿ ಈ ಊರು ಇದೆ. ಉತ್ತರದವರು ಇದಕ್ಕೆ ಶುಕ್ರತಾಲ್ ಎಂದು ಕರೆಯುತ್ತಾರೆ.

October 24, 2018 / / Articles

ಪಿಡಿಎಫ್ ಗಳನ್ನು ಲೇಖಕನ ಅಥವಾ ಪ್ರಕಾಶಕರ ಅನುಮತಿಯಿಲ್ಲದೆ ಪರಸ್ಪರರಲ್ಲಿ ಹಂಚಿಕೊಳ್ಳುವುದು ಕಳ್ಳತನವೇ ಹೌದು. ಗ್ರಂಥವೊಂದನ್ನು ಮುದ್ರಿಸಿ, ಪ್ರಚುರಪಡಿಸುವಲ್ಲಿ ಪ್ರಕಾಶಕನು ಬೆವರನ್ನಲ್ಲ, ರಕ್ತವನ್ನೇ ಬಸಿದಿರುತ್ತಾನೆ ಎಂಬುದು ಕ್ರೂರವಾದ ಸತ್ಯ. ಈ ಮಾತು ಕನ್ನಡಗ್ರಂಥಗಳ ಮಟ್ಟಿಗೆ ಹೆಚ್ಚು ಅನ್ವಯಿಸುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾಶನದ ಮಟ್ಟಿಗಂತೂ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಅನ್ವಯಿಸುವುದು. ಧರ್ಮಶಾಸ್ತ್ರಗ್ರಂಥಗಳನ್ನು ಮುದ್ರಿಸಿ ಲಾಭಗಳಿಸುವುದು ಎಂದರೆ ಸಶರೀರನಾಗಿ ಸ್ವರ್ಗಕ್ಕೆ ಹೋಗುವ ಬಯಕೆಯಂತೆಯೇ ಆಗಿದೆ. ಇದು ಕಹಿಯಾದ ವಾಸ್ತವವು.

June 20, 2017 / / Articles

ಮುನ್ನಡೆವಾಗ ಮನಸ್ಸಿನಲ್ಲಿ ಒಂದು ಪ್ರಶ್ನೆಯ ಚೂರು ಕಾಣಿಸಿಕೊಂಡಿತು. “ಇಲ್ಲಿರುವುದು ಶಿವಲಿಂಗ ಒಂದೇ ಒಂದು. ಈ ಪಂಚಮುಖದ ಶಿವಧ್ಯಾನಶ್ಲೋಕವು ಸರಿಹೊಂದುವುದೇ ಎಂದು.” ನಾನು ಈ ಪರ್ವತದ ಮೇಲೆ ಹೇಳಿಕೊಂಡ ಈ ಶ್ಲೋಕವು ಸ-ಮಂಜ-ಸವೇ ಆಗಿದೆ ಎಂದು ತುಂಗನಾಥನು ತೋರಿಸಿಕೊಟ್ಟ. ಆದರೆ ಈ ಜಾಗದಲ್ಲಿ ಅಲ್ಲ. ಚಂದ್ರಶಿಲಾ ಕೋಡುಗಲ್ಲಿನ ಬಳಿ.

September 30, 2016 / / Articles

ತಿರುಮಲೆಯಲ್ಲಿ ಶ್ರೀಶ್ರೀನಿವಾಸನಿಗೆ ಬಕುಲಾದೇವಿಯು ತಾಯಿಯಾಗಿದ್ದು ಅವನ ಸೇವೆ ಮಾಡಿದ್ದು ಎಲ್ಲರಿಗೂ ಗೊತ್ತು. ಸ್ವಾಮಿಗೆ ಪ್ರತಿದಿನವೂ ಅವಳು ವಿವಿಧ ರೀತಿಯ ಖಾದ್ಯಗಳನ್ನು…

May 8, 2014 / / Articles

ದ್ವೈತಮತದ ಯತಿಶ್ರೇಷ್ಠರುಗಳಲ್ಲಿ ಶ್ರೀವಿಬುಧೇಂದ್ರತೀರ್ಥರು ಧೃವನಕ್ಷತ್ರದಂತೆ ಕಂಗೊಳಿಸುತ್ತಿರುವ ಮಹಾ ಪ್ರತಿಭಾಸಂಪನ್ನರು. ಇವರ ಕಾಲ ೧೪ನೆಯ ಶತಮಾನ. ಇವರು ಪ್ರತಿನಿತ್ಯ ದ್ವೈತಮತವನ್ನು ಸ್ಥಾಪನೆ…

May 7, 2013 / / Articles