ಶ್ರೀಗುರುರಾಜರ ೩೪೨ನೇ ಆರಾಧನೆ – ಆಹ್ವಾನಪತ್ರಿಕೆ

ಗುರುರಾಜರು ನನ್ನಿಂದ ಮಾಡಿಸಿಕೊಂಡಿರುವ ಕೆಲಸ (ನಾನು ಮಾಡಿದ್ದೇನು ಅಷ್ಟಕ್ಕೂ?? ಡೌಟು!) ಗಳಲ್ಲಿ ಅತಿ ಹೆಚ್ಚಿನ ಕಾಲಾವಧಿಯನ್ನು ತೆಗೆದುಕೊಂಡದ್ದು ಇದು.  ಮುನ್ನೂರ ನಲವತ್ತೆರಡನೆಯ ಆರಾಧನೆಯ ಆಹ್ವಾನ ಪತ್ರಿಕೆಯು ನಾಲ್ಕು ತಿಂಗಳು ಮೊದಲೇ ಬರಬೇಕೆಂದು ಶ್ರೀಗಳವರ ಅಪ್ಪಣೆಯಾಗಿತ್ತು. ಅದರಂತೆ ಸಾಕಷ್ಟು ಮೊದಲೇ ಪ್ರಾರಂಭಿಸಿದರೂ ಕೈಗೆ ಬಂದಾಗ ಆರಾಧನೆಗೆ ಎರಡೇ ತಿಂಗಳುಗಳು ಉಳಿದಿದ್ದವು!

ಈ ಬಾರಿಯ ಆಹ್ವಾನಪತ್ರಿಕೆಯ ಕಲ್ಪನೆ ಗರಿಗೆದರಿದ್ದು ಸುಮಾರು ೧೦ ತಿಂಗಳ ಹಿಂದೆ. ಶ್ರೀಸುಯತೀಂದ್ರ ತೀರ್ಥ ಶ್ರೀಪಾದರ ೭ನೇ ಚಾತುರ್ಮಾಸ್ಯದ ಸಂದರ್ಭದಲ್ಲಿ ಬೆಂಗಳೂರಿನ ಸಹೃದಯಿ ಸ್ನೇಹಿತರಾದ ಅನಿಲಕುಮಾರರು ತಮ್ಮ ಸಂಸ್ಥೆಯ ವತಿಯಿಂದ ಮಂತ್ರಾಲಯದಲ್ಲಿ ದೇಶದ ಅನೇಕ ಕಲಾವಿದರನ್ನು ಒಂದೆಡೆ ಕಲೆಹಾಕಿ “ಶ್ರೀರಾಯರ ಕಲಾ ಕೃಪೆ”  ಎನ್ನುವ ಚಿತ್ರಕಲಾ ಶಿಬಿರವೊಂದನ್ನು ಸಂಘಟಿಸಿದ್ದರು. ಈ ಶಿಬಿರದಲ್ಲಿ ಶ್ರವಣಬೆಳಗೊಳದ ಅನಿಲ್ ಜೈನ್ ಎನ್ನುವ ಕಲಾವಿದರು ರಾಯರು ಹಸುವಿನ ಕರುವೊಂದನ್ನು ಪ್ರೀತಿಯಿಂದ ಮೈದಡವುತ್ತಿರುವ ಚಿತ್ರವನ್ನು ಮೂಡಿಸುತ್ತಿದ್ದರು. ಅದನ್ನು ನೋಡಿದಾಗ ಈ ಬಾರಿಯ ಆಹ್ವಾನಪತ್ರಿಕೆಯ ಕಲ್ಪನೆ ನನ್ನ ತಲೆಯಲ್ಲಿ ಮೊಳೆಯಿತು.

ಆಹ್ವಾನ ಪತ್ರಿಕೆಯು ಕೇವಲ ಬನ್ನಿರಿ ಎನ್ನುವುದಕ್ಕೆ ಸೀಮಿತವಾಗದೆ ಜನಮಾನಸಕ್ಕೆ ಸಂದೇಶವೊಂದನ್ನು ನೀಡುವಂತಿರಬೇಕು ಎಂದು ಆಲೋಚಿಸಿ ಹಸು ಮತ್ತು ಹಸಿರು ಎನ್ನುವ ಕಲ್ಪನೆಯೊಂದಿಗೆ ಕೆಲಸಕ್ಕಿಳಿದು ಹಲವಾರು ಇನ್ನಿತರ ಕೆಲಸಗಳ ಮಧ್ಯ ಸಮಯ ಮಾಡಿಕೊಂಡೇ ಈ ವಿನ್ಯಾಸವನ್ನು ಮುಗಿಸಿದೆ. ಅಂದಾಗ್ಯೂ ಶ್ರೀಗಳವರ ನಿರೀಕ್ಷೆಯ ಮಟ್ಟಕ್ಕಿಂತ ನಾನು ಇನ್ನೂ ಎರಡು ತಿಂಗಳು ಹಿಂದುಳಿದಿದ್ದೇನೆ ಅಂತ ಆಯ್ತು. ರಾಯರ ದಯೆ ಹೀಗೆಯೇ ನನ್ನ ಮೇಲೆ ಇದ್ದಲ್ಲಿ ಶ್ರೀಗಳವರ ನಿರೀಕ್ಷೆಯನ್ನೂ ಆದಷ್ಟು ಬೇಗ ಮುಟ್ಟಿಯೇನು.

ಅಂದ ಹಾಗೆ ನಾನು ಒಬ್ಬ ಅಭಿಜಾತ ಕಲಾವಿದ (Classical Artiste) ಏನಲ್ಲ. ಅವರಿವರು ಮಾಡಿಕೊಟ್ಟದ್ದನ್ನು ಬೇಕಾದ ಚೌಕಟ್ಟಿನಲ್ಲಿ ಕೂರಿಸಿ “ಚೆನ್ನಾಗಿ ಮಾಡಿದ್ದಾನೆ” ಅನ್ನಿಸಿಕೊಳ್ಳುವವ. ಹೀಗಾಗಿ ಈ ಆಹ್ವಾನ ಪತ್ರಿಕೆಗೆ ಬಂದಿರುವ ಸೊಗಸಿನ ಹಿರಿಮೆಯೆಲ್ಲ ಸಲ್ಲಬೇಕಾದದ್ದು ಹಲವಾರು ಜ್ಞಾತ ಅಜ್ಞಾತ ವ್ಯಕ್ತಿಗಳಿಗೆ.

  • ಚಿತ್ರವನ್ನು ಮೂಡಿಸಿದವರು : ಅನಿಲ್ ಜೈನ್ ಶ್ರವಣಬೆಳಗೊಳ
  • ಅವರನ್ನು ಮಂತ್ರಾಲಯಕ್ಕೆ ಕರೆತಂದವರು : ಎಂ. ಕೆ. ಅನಿಲ್ ಕುಮಾರ್, ಬೆಂಗಳೂರು
  • ಎರಡನೆ ಪುಟದಲ್ಲಿರುವ ಮನ್ನಾರುಗುಡಿಯ ರಾಜಗೋಪಾಲಸ್ವಾಮಿಯನ್ನು ಮೋಹಕವಾಗಿ ಮೂಡಿಸಿದವರು : ರಾಘವೇಂದ್ರ ಪ್ರಸಾದ್, ಚೆನ್ನೈ.
  • ಹಿರಿಯ ಶ್ರೀಗಳವರ ಭಾವಚಿತ್ರವನ್ನು ಕ್ಲಿಕ್ಕಿಸಿದವನು : ಶ್ರೀನಿಧಿ, ಮಂತ್ರಾಲಯ
  • ಕಿರಿಯ ಶ್ರೀಗಳವರ ಭಾವಚಿತ್ರವನ್ನು ಕ್ಲಿಕ್ಕಿಸಿದವನು : ರಾಯಚೂರಿನ ಇನಾಂದಾರ್ ಸೀನ (ಒರಿಜಿನಲಿ ಶ್ರೀನಿವಾಸ)
  • ಪ್ರೂಫ್ ನೋಡಿ “ರಘುನಂದನ ಏನೂ ತಪ್ಪು ಮಾಡಿಲ್ಲ” ಅನ್ನುವಂತೆ ಮಾಡಿದವರು : ಜೋಷಿ ಸರ್, ಶಿರೀಷಾ ಶರ್ಮ, ಭಾರ್ಗವಿ ಕೃಷ್ಣಮೂರ್ತಿ, ಬಾಲಾಜಿ ಮಾಮ ಹಾಗು ಚೊಮಿನಿ ಪ್ರಕಾಶ್.
  • ಇಂಟರ್ ನೆಟ್ಟು ಸಹ ನನಗೆ ಹಲವಾರು (ಹಲವಾರು ಏನು? ಬಹುಮಟ್ಟಿಗೆ ಎನ್ನುವುದೇ ಸರಿ) ಸಹಾಯ ಮಾಡಿದೆ.

ಈ ಕೆಳಗೆ ಇನ್ವಿಟೇಶನ್ನಿನ ಪುಟಗಳನ್ನು ಕೊಟ್ಟಿದ್ದೇನೆ. ಡೌನ್ ಲೋಡ್ ಮಾಡಿಕೊಳ್ಳಿ. ಇತರೆಡೆಗೆ ಶೇರ್ ಮಾಡಿಕೊಳ್ಳುವ ಮುನ್ನ ಈ ಚಿತ್ರಗಳೆಲ್ಲ ಮಂತ್ರಾಲಯ ಮಠದ ಸ್ವಾಮ್ಯಕ್ಕೆ ಒಳಪಟ್ಟಿವೆ ಎನ್ನುವುದನ್ನು ಮರೆಯದಿರಿ.

ಕೊನೆಯದಾಗಿ : ಕೆಲವೊಂದು ಆನ್ ಲೈನ್ ಮಾಧ್ವ ಯುವ ವೇದಿಕೆಗಳು ಶ್ರೀಮಠದ ವೆಬ್ ಸೈಟಿನಿಂದ ಚಿತ್ರಗಳನ್ನು “ತಾವೇ ಸಂಪಾದಿಸಿದ್ದು” ಎನ್ನುವಂತೆ ಮಠದ ವಾಟರ್ ಮಾರ್ಕನ್ನು ಕ್ರಾಪ್ ಮಾಡಿ ಶೇರ್ ಮಾಡುವದನ್ನು ನಾನು ಗಮನಿಸಿದ್ದೇನೆ.  ಮಾಧ್ವರಿಗೆ ಮಾಹಿತಿ ಕೊಡುವ ಭರದಲ್ಲಿ ಅವರು ಚಿತ್ರದ ಮೂಲವನ್ನು ಆಳಿಸಿಹಾಕುತ್ತಿರುವುದು ಖೇದಕರ. ರಾಯರು ಅವರಿಗೆ ಬುದ್ದಿ ಕೊಡಲಿ.

ಸಂಪೂರ್ಣ ಆಹ್ವಾನ ಪತ್ರಿಕೆಯನ್ನು ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿ

Download (ಈ ಫೈಲು 1.2 MB ಇದೆ.)

ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಮುಖಪುಟ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಮಂಗಳಾಶಂಸನ – ರಾಜಗೋಪಾಲಸ್ತುತಿ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಆಹ್ವಾನ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಆರಾಧನಾ ಜ್ಞಾನಯಜ್ಞ ಹಾಗು ಪ್ರೋಷ್ಠಪದೀ ವಿಶೇಷ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ ವಿವರ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಸಾಂಸ್ಕೃತಿಕ ಕಾರ್ಯಕ್ರಮಗಳು
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಚಾತುರ್ಮಾಸ್ಯ ದೀಕ್ಷಾ ವಿವರ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಕಳೆದ ವರ್ಷದ ಅಭಿವೃದ್ಧಿಯ ವಿವರಣೆ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ದಾನಗಳ ವಿವರ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಹಸಿರು ಮಂತ್ರಾಲಯದ ವಿವರ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಹಸಿರುವ ಮಂತ್ರಾಲಯದ ವಿವರ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಶ್ರೀಗುರುರಾಜರ ಕರುಣೆಯ ಕಂದ ಶ್ರೀಸುಶಮೀದ್ರರು

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

17 Comments

  1. Mayur Kulkarni
    July 24, 2013
    Reply

    WONDERFUL…….. SUPERB…………
    If its done by you sir…hats off to you …. i am being greedy (swarthi) but request you to send one copy at least to our branch….. truly it is a marvelous job.
    Also in your introductory note you have forgotten your own name though written in first person. Kindly add the same. otherwise one does not understand who is writing it.
    Thanking you once again. Also thanks for your photos.
    Awaiting your reply,
    Regards,
    Mayur.
    9890677006

    • rns
      July 24, 2013
      Reply

      Mayur mere bhaayi! Only today I realized there are several hundred things that i should know and learn. One among them is that you can read Kannada too!

      What is there to be greedy in asking a copy for the Matha?? I will ask DM and Co to send it today. And btw, I got a pair of Saangli ootada Tatti at My sister 🙂

  2. Shekar
    July 24, 2013
    Reply

    Yet another opportunity to be at the service of guru Sarvarbhoumaru. Year after year millions of bhaktas are blessed and the occassion of Aradhana, we all pray to his holiness in unison again to guide us in the righteous path . The green coloured invitation is indeed the most plesant,soothing color and design,concept of invitation is a major leap towards direction of conservation of the evironment. Hearty congratulations to the designer/s and the team.

    • rns
      July 24, 2013
      Reply

      Shekhar, Thanks for the comment. Yes, as you said this is yet another opportunity! Also, it interesting to see the increment in rush of devotees.

      Swamiji is initiating an afforestation program very soon. If nature cooperates as desired then Mantralaya and surrounding villages will clad green!

  3. Raghavendra
    July 24, 2013
    Reply

    Great Job, wonderful – NO WORD TO SAY…

  4. Naveen
    July 25, 2013
    Reply

    Nice sir….
    RAYARE GATHIYU NAMAGE

  5. Dr.R.Ganesh
    July 25, 2013
    Reply

    Dear Webmaster

    The invitation looks green and nice to know its printed on eco friendly recycled paper. Its a lesson that the nature has taught us in Uttarakhand that we should not encroach nature extremely.

    Nice invite…

    dr.r.ganesh

  6. sujananippani
    July 27, 2013
    Reply

    Sir, Its amazing no words to say just “ADHBHUTHAM”.

  7. L N ACHARYA, ANEKAL
    July 27, 2013
    Reply

    ಆಹ್ವಾನ ಪತ್ರಿಕೆ ಕಲ್ಪನೆಯಲ್ಲಿ ನಿನಿಗೆ ನೀನೇ ಸಾಟಿ ರಘು, ರಾಯರು ನಿನಗೂ ನನ್ನ ತಂಗಿಗೂ ನಿರಂತರವಾಗಿ ಅವರ ಉತ್ಕೃಷ್ಟ ಸೇವೆ ಮಾಡುವ ಭಾಗ್ಯ ಕರುಣಿಸಲಿ.

  8. bindumadhav varahmurty
    July 28, 2013
    Reply

    very nice organaised invitation. i am very much pleased to read the invitation. i want to donate for a student for vidhya danon monthly basis.whether it is possible. I am working in bank of india. please informe

  9. Vijay Kumar
    July 28, 2013
    Reply

    Simplicity.. Great words..!!! I proud to say .. I am Your brother..

  10. shriinivas desai raibag
    July 29, 2013
    Reply

    Great effort no words to explain. Blend of creativity & care of nature.

  11. Nikhil Desai
    July 30, 2013
    Reply

    Simply Superb ! Ella rayara mahime.

    Guru Raghavendra, Ella ninnade, Guruve..

    Best wishes.

  12. August 17, 2013
    Reply

    ಶ್ರೀ ವಿಷ್ಣು ಪ್ರೇರಣೆ ಯಿಂದ ಶ್ರೀ ವಿಷ್ಣು ಪ್ರೀತ್ಯರ್ಥ ಈ ಪ್ರತಿಕ್ರಿಯೆ ಅರ್ಪಿಸುತ್ತಿದ್ದೇನೆ.

    ಆವಾಹನ ಪತ್ರ ಪ್ರಕೃತಿಯ ಮಡಿಲಲ್ಲಿ ನಮ್ಮನ್ನು ಸಂತೈಸುವಂತಿದೆ. ಅಲ್ಹಾದಕರ ವಾಗಿದೆ.

    ಕಾಲಾವಧಿ ಒಂದು ಕಲ್ಪನೆ. ಕಾರ್ಯ ಮನಮುಟ್ಟುವಂತಾದಾಗ ಕಾಲ ಮಾಯವಾಗುವುದು. ಅಷ್ಟಕ್ಕೂ ಅರ್ಪಣೆ ಮಾಡುವವರಿಗೆ ಕಾಲದ ಹಂಗೇನು?

    ರಾಯರ ಕೃಪೆಯನಂಬಿದ ನಿಮಗೆ ಕ್ಷಣದಲ್ಲಿ ಜನುಮದ ಸಾರ್ಥಕ ಕಾರ್ಯಗಳು ಲಭಿಸುತ್ತವೆ. ಆದದ್ದು ಹಾಗೆಯೇ ಇನ್ನೂ ನಿಮಗೆ ಬೇಕಾದಷ್ಟು ಕೆಲಸಗಳಾಗುವವು ಶ್ರೀ ಗುರುರಾಯರು ನಿಮ್ಮಿಂದ ಮಾಡಿಸಿಕೊಂಡಲ್ಲಿ…..

    ನನಗೂ ಗುರುಗಳ ಕೃಪೆ ಆದಂತಿದೆ. ಶ್ರೀಮತಿ ಅರುಣಾ ಸೈರಾಂ ಅವರು ನನ್ನ “ದಯ ತೋರೋ ಗುರುರಾಯ” ಸಂಗೀತ ಕಚೇರಿಯಲ್ಲಿ ಅರ್ಪಿಸುತ್ತಿದ್ದಾರೆ.

    ರಾಯರು ನಿಮ್ಮೆಲ್ಲ ಇಷ್ಟಾರ್ಥಗಳನ್ನು ಪೂರೈಸಲಿ.

    ಧನ್ಯವಾದಗಳು

    ಕೃಷ್ಣ ಬುರ್ಲಿ

  13. Vageesh
    August 19, 2013
    Reply

    Very well done. Thanks for sharing the process behind its making.

Leave a Reply to L N ACHARYA, ANEKALCancel reply

This site uses Akismet to reduce spam. Learn how your comment data is processed.