Category: Articles

October 18, 2018 / / Articles

ಶ್ರೀಹರಿಯು ಸ್ವಪ್ನಾವಸ್ಥೆಯಲ್ಲಿ ಯಾರಿಗೆ ಹೇಗೆ ಪ್ರೇರಣೆ ಮಾಡುತ್ತಾನೋ ಹೇಳಲಾಗದು. ಜ್ಞಾನಿಗಳು ಮತ್ತು ಆಚಾರಶೀಲರಾದವರಿಗೆ ಅವನ ಪ್ರಾಶಸ್ತ್ಯವೆನ್ನುವುದು ಖಂಡಿತ. ಆದರೆ ಎಷ್ಟೋ ಬಾರಿ ಮೇಲ್ನೋಟಕ್ಕೆ ಅತ್ಯಂತ ಸಾಧಾರಣಸ್ವರೂಪದಲ್ಲಿ ಕಾಣುವ ಜನರಿಗೂ ಅವನಿಂದ ವಿಶೇಷವಾದ ಅನುಭವಗಳಾಗಿರುತ್ತವೆ. ಇಂತಹುದೇ ಒಂದು ಮೈನವಿರೇಳಿಸುವ ಒಂದು ಘಟನೆಯು ನನ್ನ ಅರಿವಿಗೆ ಬಂದಿತು.

October 17, 2018 / / Articles
October 14, 2018 / / Articles

ಶ್ರೀಮನ್ಮಾಧವತೀರ್ಥ ಶ್ರೀಪಾದಂಗಳವರ ಆರಾಧನೆಯನ್ನು ನಮ್ಮ ಗುರುಗಳು ಮೊನ್ನೆ ಕಂಪ್ಲಿಯಲ್ಲಿ ಆಚರಿಸಿದ ವಿಷಯವನ್ನು ಕುರಿತು ನಡೆದಿರುವ ಚರ್ಚೆಯಲ್ಲಿ ನಾನೊಂದು ಕಮೆಂಟಿಗೆ ಪ್ರತ್ಯುತ್ತರ…

August 28, 2018 / / Articles

“ಕರೆದರೆ ಬರಬಾರದೆ ಅಂದ ತಕ್ಷಣ ಬಂದೇ ಬಿಡ್ತಾರೆ ಅಲ್ವೇನು ರಾಯರು” ಅನ್ನುತ್ತಲೇ ನಮ್ಮ ಪ್ರೀತಿಯ ಪಲಿಮಾರು ಶ್ರೀಗಳು ಶ್ರೀರಾಯರ ಅಭಿಷೇಕಕ್ಕೆ ಅಣಿಯಾದರು ಇಂದು ಬೆಳಿಗ್ಗೆ.

August 16, 2018 / / Articles

ಇತಿಹಾಸದ ಅಧ್ಯಯನ ಮಾಡುವವರಿಗೆ ಮಾಧ್ವಸಮೂಹವು ಎರಡು ಅವಳಿಜವಳಿ ದೀಪಗಳನ್ನು ಕೊಡುಗೆಯಾಗಿ ಕೊಟ್ಟಿತ್ತು. ಈ ದೀಪಗಳ ಬೆಳಕಿನಲ್ಲಿ ಅನೇಕ ಮಂದಿ ಆಸಕ್ತರು ಇತಿಹಾಸವನ್ನು ಅಧ್ಯಯನ ಮಾಡಿ ಯಶಸ್ಸನ್ನು ಪಡೆದಿದ್ದಾರೆ. ಈ ಎರಡು ದೀಪಗಳ ಹೆಸರೂ ಶ್ರೀನಿವಾಸ ಎಂದೇ. ಮೊದಲನೆಯ ದೀಪವು ಹಾವನೂರಿನಿಂದ ಎಣ್ಣೆಯನ್ನು ಪಡೆಯುತ್ತಿತ್ತು. ಎರಡನೆಯದ್ದು ಹೊಸರಿತ್ತಿಯಿಂದ. ಮೊದಲನೆಯ ದೀಪವು ಶಾಂತವಾಗಿ ಹಲವು ವರ್ಷಗಳೇ ಕಳೆದಿವೆ. ಈ ದಿನದಂದು ಎರಡನೆಯ ದೀಪವು ಕೂಡ ನಂದಿಹೋಗಿದೆ!

August 16, 2018 / / Articles

ಈ ನಾಲ್ಕಾರು ದಿನಗಳಿಂದ ನಮ್ಮಲ್ಲಿ ವಿಪರೀತವಾದ ಮಳೆ ಶುರುವಾಗಿದೆ. ಬಹಳ ಜೋರಾಗಿದೆ ಆರ್ಭಟ. ಈ ಆರ್ಭಟವನ್ನು ನೋಡಿ ಮನಸ್ಸಿನಲ್ಲಿ ಒಂದು ಪ್ರಶ್ನೆ ಬಂದಿತು. ಏನಿದು? ಈ ಉಡುಪಿಯ ಜನ ಹೇಳುವಂತೆ ಆಟಿಯ ಮಳೆ ಶುರುವಾಗಬೇಕಿತ್ತು. ಆದರೆ ಅತ್ಯಂತ ರಭಸವಾಗಿದೆಯಲ್ಲ ಮಳೆ! ಏನಿದರ ಕಾರಣ ಎಂಬುದು ಆ ಪ್ರಶ್ನೆ. ಉತ್ತರವಿಲ್ಲದೆ ನಿನ್ನೆಯ ದಿನವು ಕೊನೆಗೊಂಡಿತು.

June 15, 2018 / / Articles

ಇಂದು ಮಧ್ಯಾಹ್ನ ಎ.ಎನ್.ಐ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಒಂದು ಸುದ್ದಿಯನ್ನು ಉಲಿದಿದೆ. ​ಅಧಿಕೃತ ವರದಿಗಳ ಪ್ರಕಾರ ಡೆಹ್ರಾಡೂನ್, ಟೆಹ್ರಿ, ಪೌಡಿ ಮತ್ತು ನೈನಿತಾಲ್ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯ ಸುರಿಯುವ ನಿರೀಕ್ಷೆ ಇದೆ. ಎಂದು. ಈಗ ಅಲ್ಲಿ ಮಳೆ ಬಂದರೂ ಕೂಡ, ಯಾತ್ರಿಕರಿಗೆ ಯಾವುದೇ ತೊಂದರೆಯಾಗದಿರಲಿ ಎಂದು ಪ್ರಾರ್ಥಿಸೋಣ. ನೈಸರ್ಗಿಕ ಆಕಸ್ಮಿಕಗಳ ಸಂದರ್ಭಗಳಲ್ಲಿ ಯಾತ್ರಿಕರು ಮೊದಲು ಕೈಗೊಳ್ಳಬೇಕಾದ ಕ್ರಮಗಳನ್ನು ಇಲ್ಲಿ ಕೊಟ್ಟಿದೆ. ಯಾತ್ರೆಯ ಇಚ್ಛೆಯುಳ್ಳವರು ಇದನ್ನು ಓದಿಕೊಳ್ಳುವುದು ಉತ್ತಮ.

May 31, 2018 / / Articles

ಇಷ್ಟೆಲ್ಲಾ ವ್ಯವಹಾರ ನಡೆಯುವ ಈ ನಗರದ ಹಿಂದೆ ಯಾವ ಮನೆಮುರುಕರ ತಂತ್ರಗಾರಿಕೆಯೂ ಇಲ್ಲ. ಇಲ್ಲಿ ಉಸಿರಾಡುವ ಯಾವ ಜೀವಿಯೂ ಆಧುನಿಕ ಎಂಬಿಯೇ ಮತ್ತಿತರ ಹಣಮಾಡುವ ಡಿಗ್ರಿಯನ್ನು ಪಡೆದಿಲ್ಲ. ಯಾವ ಗಂಡಸೂ ಟೈ ಹಾಕಿಕೊಂಡಿಲ್ಲ, ಯಾವ ಹುಡುಗಿಯೂ ಲೋಗೋ ಇರುವ, ಮೈ ಬಿಗಿವ ಬಟ್ಟೆಯನ್ನು ಧರಿಸಿಲ್ಲ! ಯಾರ ಮುಖವೂ ಅಸಹಜವಾದ ಪೌಡರು, ತುಟಿರಂಗುಗಳನ್ನು ಬಳಿದುಕೊಂಡಿಲ್ಲ! ಯಾರ ಮುಖವನ್ನು ನೋಡಿದರೂ ಅದು ಕಷ್ಟವನ್ನು ಎತ್ತಿ ತೋರಿಸುವ ಬೆವರಿನಿಂದಲೇ ಕೂಡಿದೆ! ವಿನಯಭರಿತವಾಗಿಯೇ ಗಂಟಲಿಗೆ ಗಾಳ ಹಾಕುವ ಸೃಗಾಲ ನೀತಿಗೆ ಇಲ್ಲಿ ತಾವಿಲ್ಲ! ಇಲ್ಲಿರುವುದು ಏನಿದ್ದರೂ ಏರುಧ್ವನಿಯ, ಜೋರು ಮಾತಿನ ಪ್ರಾಮಾಣಿಕತೆ ಮಾತ್ರ. ಬೇಕಿದ್ದರೆ ತೊಗೋ ಇಲ್ಲದಿದ್ದರೆ ಇಲ್ಲ ಎನ್ನುವ ನೇರವಂತಿಕೆ ಮಾತ್ರ.

May 24, 2018 / / Articles

ಆರ್ಥಿಕ ಪ್ರಗತಿಯನ್ನು ಸಾಧಿಸಲು ಇರುವ ಎಲ್ಲ ದಾರಿಗಳನ್ನೂ ಹಿಂದಿನ ಕಾಂಗ್ರೆಸ್ ಸರ್ಕಾರಗಳು ತಮ್ಮ ಯಥಾಶಕ್ತಿ ಮುಚ್ಚಿಯೇ ಹಾಕಿವೆ! ಈಗ ಆ ಮುಚ್ಚಿ ಹೋಗಿರುವ ಮಾರ್ಗಗಳನ್ನು ತೆಗೆಯಬೇಕು. ಜೊತೆಗೆ ಹೊಸದಾದ, ನಮ್ಮ ಸಂಸ್ಕೃತಿಗೆ ಹಾನಿ ಮಾಡಲಾರದ ಮಾರ್ಗಗಳನ್ನೂ ಹುಡುಕಬೇಕು. ಸಧ್ಯದ ಪರಿಸ್ಥಿತಿ ನೋಡಿದರೆ ಹೊಲಸು ಜನರು ಮೋದಿಯವರನ್ನ ಸ್ಥೈರ್ಯವನ್ನು ಕುಗ್ಗಿಸುವ ಎಲ್ಲ ವಿಧವಾದ ಅನೈತಿಕ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಹೀಗಿರುವಾಗ ಎಲ್ಲರಿಗಿಂತ ಪ್ರಾಮಾಣಿಕರೆನಿಸುವ ಮೋದಿಯವರ ಒಳಿತಿಗಾಗಿ ಪ್ರಾರ್ಥನೆ ಮಾಡುವುದರಲ್ಲಿ ತಪ್ಪೇನು?

April 28, 2018 / / Articles

ಜಲಸ್ಥಂ ವಿಷ್ಣು, ಡೋಲಸ್ಥಂ ಕೃಷ್ಣಂ, ರಥಸ್ಥಂ ಕೇಶವಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ ಎಂದು ಹಿರಿಯರು ಹೇಳಿದ್ದಾರೆ. ಕೇಶವನ ರಥೋತ್ಸವವನ್ನೂ ಕೃಷ್ಣನ ತೊಟ್ಟಿಲು ಸೇವೆಯನ್ನೂ ನಾವು ಅನೇಕ ಕಡೆ ನೋಡಿದ್ದೇವೆ. ಆದರೆ ಜಲಶಾಯಿಯಾದ ನಾರಾಯಣನನ್ನು ನೋಡಿರುವವರು ಕಡಿಮೆ. ಕೇವಲ ಭಾಗ್ಯಶಾಲಿಗಳಷ್ಟೇ ನೋಡಲು ಸಾಧ್ಯ. ಯಾಕೆಂದರೆ ಜಲನಾರಾಯಣನ ಗುಡಿಯು ಇರುವುದು ನೇಪಾಳದಲ್ಲಿ. ಅಲ್ಲಿಗೆ ಎಲ್ಲರೂ ಹೋಗಲಾಗುವುದಿಲ್ಲ ಅಲ್ಲವೇ!? ಚಿಂತೆ ಬೇಡ. “ಸುಲಭಪೂಜೆಯ ಮಾಡಿ ಬಲವಿಲ್ಲದವರು” ಎಂಬ ದಾಸರ ಮಾತನ್ನು ನೆನೆಸಿಕೊಳ್ಳೋಣ. ಕೆಳಗೆ ಕೊಟ್ಟಿರುವ ಸರಳ ಕ್ರಮಗಳನ್ನು ಅನುಸರಿಸಿ ಭಕ್ತಿಯಿಂದ, ಆದಷ್ಟೂ ಅನುಸಂಧಾನಪೂರ್ವಕವಾಗಿ ಪೂಜಿಸೋಣ. ದೇವನು ಖಂಡಿತವಾಗಿಯೂ ಪ್ರೀತನಾಗುವನು. ಎಷ್ಟು ಸುಲಭವಾದ ಪೂಜೆ ನೋಡಿ ಇದು.