ಕರಣಿಕರ ಎದೆ ಝಲ್ಲೆಂದಿತು. ಸ್ವಾಮೀ !! ನಿನ್ನ ಇಚ್ಛೆ ಇಲ್ಲಿಯೇ ಇರಬೇಕೆಂದು ಇದೆಯೇ? ಎಂದು ಪ್ರಾರ್ಥಿಸಿ ನನ್ನ ಅನುಚರರ ಅರೋಗ್ಯ ಸರಿಮಾಡು ಪುನಃ ಸ್ವಸ್ಥಾನಕ್ಕೆ ಸೇರಿಸಿ ಬರುವೆ ಎಂದು ಬೇಡಿಕೊಂಡ !! ಅನುಚರರ ಕಣ್ಣು ಕಾಣತೊಡಗಿದವು. ಆದರೆ ಮಾರುತಿಯರಾಯ ಒಂದು ಇಂಚೂ ಅಲುಗುತ್ತಿಲ್ಲ. !!! ಪುನಃ ಬೇಡಿಕೊಂಡ ಕರಣಿಕ.. ಸ್ವಾಮಿಯ ವಿಗ್ರಹದಿಂದ ಭವ್ಯ ಬೆಳಕು ಗೋಚರವಾಯಿತು
eeshavasyam Posts
ಮಾರನೆಯ ದಿನ ಬೆಳಿಗ್ಗೆ ಬಾಳೆಯ ನಾರಿನಲ್ಲಿ ಸುತ್ತಿದ ನಾಲ್ಕಾರು ಹೋಳಿಗೆಗಳು ಶಿಬರೂರಿನ ತಂತ್ರಿಗಳ ಅಡುಗೆ ಕೋಣೆಯನ್ನು ತಲುಪಿದವು. ಕೊಟ್ಟಾರಿಗಳಿಗೂ ಏನೋ ಸಂತೋಷ, ಈ ಕೆಲಸ ಮಾಡಲು. ಆ ದಿನ ಮಧ್ಯಾಹ್ನ ವೈಶ್ವಾನರನ ಆರಾಧನೆ ಮುಗಿದ ನಂತರ ಕುಲಪತಿಗಳಿಗೆ ಈ ವಿಷಯ ತಿಳಿದು ಹೃದಯ ಅರಳಿತು.
ಜವಾಬ್ದಾರಿಯನ್ನು ಹೇಗೆ ನಿರ್ವಹಿಬೇಕು ಎಂಬುದಕ್ಕೆ ಗುರುಗಳೇ ಪ್ರತ್ಯಕ್ಷ ಮಾದರಿ. ಇದೇ ಅಲ್ಲವೇ ಪ್ರೇಮವೆಂದರೆ? ಇದೇ ಅಲ್ಲವೇ ಸಾಮರ್ಥ್ಯವೆಂದರೆ? ಇದುವೆ ಅಲ್ಲವೇ ಶ್ರೀ-ಪ್ರಾಣ-ನಾಥನ ಒಲುಮೆಗೆ ಪಾತ್ರರಾಗುವುದು ಎಂದರೆ?
ಅಬ್ಬಾ! ಎಂತಹ ಮಹಾವ್ಯಕ್ತಿತ್ವ ಶ್ರೀಭುವನೇಂದ್ರ ತೀರ್ಥರದ್ದು? ಬರೆದ ಒಂದಕ್ಷರವನ್ನು ಕೂಡ ಅಳಿಸಿ ಹಾಕಲು ನಮ್ಮ ಮನಸ್ಸೊಪ್ಪದು. ಅಂತಹುದರಲ್ಲಿ ಸಕಲ ಅಕ್ಷರಾಭಿಮಾನಿ ದೇವತೆಗಳೆಲ್ಲ ನಾಮುಂದು ತಾಮುಂದು ಎಂದು ಬಂದು ನೆಲೆಸಿದ ಮಹಾನ್ ಭಾಷ್ಯವೊಂದನ್ನು ನೀರಲ್ಲಿ ವಿಸರ್ಜನೆ ಮಾಡಲು ಅದೆಷ್ಟು ಧೈರ್ಯ ಇದ್ದಿರಬೇಕು? ಆಚಾರ್ಯ ಮಧ್ವರ ಮಾತು ಎಂದರೆ ಅದೆಂತಹ ನಿಷ್ಠೆ ಅವರಿಗೆ? ಅದೆಷ್ಟು ಪ್ರೇಮ ಅವರ ಮೇಲೆ?
ಪ್ರತೀ ಸಲವೂ ಕರ್ನಾಟಕದವರೇ ಈ ರೀತಿಯ ಅನ್ಯಾಯಕ್ಕೆ ಒಳಗಾಗಬೇಕೇ? ಸಾವಿರಾರು ಜನ ನಿತ್ಯ ಬ್ಲಾಕಿನಲ್ಲಿ ಹಣ ಕೊಟ್ಟಾದರೂ ಓಡಾಡುವ ಮಾರ್ಗವೊಂದರಲ್ಲಿ ರೈಲನ್ನು ಓಡಿಸಲು ಅದೆಷ್ಟು ಬೇಸರ ಈ ಇಲಾಖೆಗೆ? ನಮ್ಮ ಹಕ್ಕಾಗಿರುವ ಈ ವಿಷಯಕ್ಕೆ ನಾವು ಎಷ್ಟೆಂದು ಅಳಬೇಕಾಗಿದೆಯಲ್ಲ ಇವರೆಲ್ಲರ ಮುಂದೆ? ಕೊಟ್ಟ ರೈಲುಗಳಿಗೂ ನೂರೆಂಟು ಕಂಡಿಷನ್ನುಗಳು. ಈ ಕಂಡಿಷನ್ನುಗಳಿಗೆ ಒಪ್ಪಿಕೊಂಡರೂ ಏನಾದರೂ ಒಂದು ಕೊರತೆಯನ್ನು ಬೇಕೆಂದೇ ನಿರ್ಮಿಸುತ್ತಾರಲ್ಲ. ಎಂತಹ ದುರ್ದೈವ ನಮ್ಮದು?
ಫೋಟೋವನ್ನು ಒಂದು ಒಳ್ಳೆಯ ಉದ್ದೇಶದಿಂದಲೇ ಮಾಡಿದ್ದು ಎಂದುಕೊಳ್ಳೋಣ. ಆದರೆ ಕ್ರಮವು ಮಾತ್ರ ಸರಿಯಾದುದಲ್ಲ. ರಾಯರ ಮೇಲೆ ಭಕ್ತಿಯನ್ನು, ಸರಿಯಾದ ಮಾರ್ಗವನ್ನು ಪ್ರೀತಿಯಿಂದ ಪ್ರಚಾರ ಮಾಡಬೇಕೇ ಹೊರತು ಹೀಗೆ ವಿಚಿತ್ರರೀತಿಯಲ್ಲಿ ಅಲ್ಲ. ಹೀಗೆ ಮಾಡಿದರೆ ನಮಗೂ ಮಿಶನರಿಗಳಿಗೂ ವ್ಯತ್ಯಾಸವೇ ಇಲ್ಲವಾಗುತ್ತದೆ.
ದುಃಖವನ್ನು ತಡೆಯದೆ, ಕಣ್ಣುಗಳೆರಡನ್ನೂ ಮುಚ್ಚಿ, ಕೃಷ್ಣ ಕೃಷ್ಣ…. ಎನ್ನುತ್ತಲೇ ಇರುವಂತೆ… ಜನರ ಮಧ್ಯದಿಂದ ಮತ್ತೊಮ್ಮೆ ಬಂಗಾರದ ಹೊಳೆಯಂತೆ ಬೆಳಕು ಬಂದಿತು. ಕಂಗಳ ಒಳಪಟಲಕ್ಕೆ ಆ ಬೆಳಕು ಸೋಕಿದ್ದೇ ತಡ. ಕಂಬನಿ ತುಂಬಿದ ತನ್ನ ಕಣ್ಣೆವೆಗಳನ್ನು ನಿಧಾನವಾಗಿ ತೆರೆದಳು ಕುಬ್ಜೆ. ಅಷ್ಟೇ!. ಹೃದಯವು ಒಮ್ಮೆಗೇ, ಒಂದೇ ಬಾರಿ ಸದ್ದು ಮಾಡಿ ನಿಂತೇ ಹೋದಂತಾಯಿತು. ಬಂದದ್ದು ಬೆಳಕು ಮಾತ್ರವಲ್ಲ. ತನ್ನ ಹೃದಯಪ್ರಕಾಶದ ಒಡೆಯನೇ ನಡೆದು ಬಂದಿದ್ದ!
ಇತ್ತೀಚೆಗೆ ಬಾಗಲಕೋಟೆಯ ಭಕ್ತರೊಬ್ಬರ ಮನೆಯಲ್ಲಿ ಪರಿಮಳಪ್ರಸಾದವು ಶಾಲಗ್ರಾಮಗಳಾಗಿದ್ದಾವೆ ಎಂಬ ಒಂದು ಮಾತು ಬಂದಿತು. ಅದನ್ನು ಕುರಿತು ಶ್ರೀ ವಾದಿರಾಜ ಹೆಚ್.ಕೆ ಎನ್ನುವ ಒಬ್ಬರು ಕೆಲವು ಧರ್ಮಸಂದೇಹಗಳನ್ನು ಮಾಡಿದ್ದರು. ಆದರೆ ತಿಳಿದವರಾರೂ ಅದಕ್ಕೆ ಉತ್ತರ ಕೊಡದೆ ಹೋದ ಪ್ರಯುಕ್ತ ಸುಮ್ಮನೆ ಚರ್ಚೆಯು ಅಡ್ಡ ಹಾದಿಗೆ ಹೋಯಿತು. ಯಾರೋ ದೇಶಪಾಂಡೆ ಎನ್ನುವವರು ರಾಯರ ಮಹಿಮೆಯನ್ನೇ ಪ್ರಶ್ನಿಸಿದರು. ಅವರ ಮಾತಿಗೆ ಉತ್ತರ ಬರೆವಷ್ಟರಲ್ಲಿ ವಾದಿರಾಜರು ಕಮೆಂಟ್ಸನ್ನು ಆಫ್ ಮಾಡಿಬಿಟ್ಟರು. ಸರಿ ಹೇಗಿದ್ದರೂ ಬರೆಯುತ್ತಿದ್ದೇನೆ ಡೀಟೇಲ್ ಆಗಿಯೇ ನನ್ನ ಅಭಿಪ್ರಾಯವನ್ನು ಇಲ್ಲಿ ಬರೆಯೋಣವೆಂದುಕೊಂಡೆ. ಇಲ್ಲಿದೆ ನನ್ನ ಉತ್ತರ.