ಆದರೆ ಈ ವಿಷಯವನ್ನು ಕುರಿತು ಇನ್ನೂ ಆಳವಾಗಿ ನೋಡಿದರೆ ಶ್ರೀಕೃಷ್ಣನ ನಿಜವಾದ ರಥವೆಂದರೆ ಪ್ರಾಣದೇವರೇ ಆಗಿದ್ದಾರೆ ಎನ್ನುವುದು ನಮಗೆ ತಿಳಿಯುತ್ತದೆ. ಶ್ರೀವಿಷ್ಣುಸಹಸ್ರನಾಮದಲ್ಲಿ ವರದೋ ವಾಯುವಾಹನಃ ಎಂದಿರುವುದು ಇದನ್ನೇ. ವಿಷ್ಣುವು ವಾಯುವಿನ ಮೇಲೆ ಕುಳಿತು ವರಗಳನ್ನು ಕೊಡುವವನು ಎಂದು ಇದರ ಅರ್ಥ. ಈ ಅರ್ಥದಲ್ಲಿ ರಥಾಭಿಮಾನಿದೇವತೆಗಳೂ ಮತ್ತು ರಥವನ್ನು ಎಳೆವ ಅದೃಷ್ಟಶಾಲಿಗಳ ಅಂತರಂಗದಲ್ಲೂ ನಿಂತು ಕಮಲಾನಾಥನನ್ನು ಹೊತ್ತು ತಿರುಗಾಡಿಸುವವರು ಪ್ರಾಣದೇವರೇ ಆಗಿದ್ದಾರೆ. ಸಹಜವಾಗಿಯೇ ಸಂತಸದ ಸರ್ವಶ್ರೇಷ್ಠಾನುಭವವು ದೊರೆಯುವುದು ಮುಖ್ಯಪ್ರಾಣದೇವರಿಗೆ ಮಾತ್ರ. ಉಳಿದವರಿಗೆಲ್ಲ ಆಗುವುದು ಅವರವರ ಯೋಗ್ಯತಾನುಸಾರವಾದ ಆನಂದಾನುಭವ.
eeshavasyam Posts
ಪಿಡಿಎಫ್ ಗಳನ್ನು ಲೇಖಕನ ಅಥವಾ ಪ್ರಕಾಶಕರ ಅನುಮತಿಯಿಲ್ಲದೆ ಪರಸ್ಪರರಲ್ಲಿ ಹಂಚಿಕೊಳ್ಳುವುದು ಕಳ್ಳತನವೇ ಹೌದು. ಗ್ರಂಥವೊಂದನ್ನು ಮುದ್ರಿಸಿ, ಪ್ರಚುರಪಡಿಸುವಲ್ಲಿ ಪ್ರಕಾಶಕನು ಬೆವರನ್ನಲ್ಲ, ರಕ್ತವನ್ನೇ ಬಸಿದಿರುತ್ತಾನೆ ಎಂಬುದು ಕ್ರೂರವಾದ ಸತ್ಯ. ಈ ಮಾತು ಕನ್ನಡಗ್ರಂಥಗಳ ಮಟ್ಟಿಗೆ ಹೆಚ್ಚು ಅನ್ವಯಿಸುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾಶನದ ಮಟ್ಟಿಗಂತೂ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಅನ್ವಯಿಸುವುದು. ಧರ್ಮಶಾಸ್ತ್ರಗ್ರಂಥಗಳನ್ನು ಮುದ್ರಿಸಿ ಲಾಭಗಳಿಸುವುದು ಎಂದರೆ ಸಶರೀರನಾಗಿ ಸ್ವರ್ಗಕ್ಕೆ ಹೋಗುವ ಬಯಕೆಯಂತೆಯೇ ಆಗಿದೆ. ಇದು ಕಹಿಯಾದ ವಾಸ್ತವವು.
ಶ್ರೀಹರಿಯು ಸ್ವಪ್ನಾವಸ್ಥೆಯಲ್ಲಿ ಯಾರಿಗೆ ಹೇಗೆ ಪ್ರೇರಣೆ ಮಾಡುತ್ತಾನೋ ಹೇಳಲಾಗದು. ಜ್ಞಾನಿಗಳು ಮತ್ತು ಆಚಾರಶೀಲರಾದವರಿಗೆ ಅವನ ಪ್ರಾಶಸ್ತ್ಯವೆನ್ನುವುದು ಖಂಡಿತ. ಆದರೆ ಎಷ್ಟೋ ಬಾರಿ ಮೇಲ್ನೋಟಕ್ಕೆ ಅತ್ಯಂತ ಸಾಧಾರಣಸ್ವರೂಪದಲ್ಲಿ ಕಾಣುವ ಜನರಿಗೂ ಅವನಿಂದ ವಿಶೇಷವಾದ ಅನುಭವಗಳಾಗಿರುತ್ತವೆ. ಇಂತಹುದೇ ಒಂದು ಮೈನವಿರೇಳಿಸುವ ಒಂದು ಘಟನೆಯು ನನ್ನ ಅರಿವಿಗೆ ಬಂದಿತು.
ಶ್ರೀಮನ್ಮಾಧವತೀರ್ಥ ಶ್ರೀಪಾದಂಗಳವರ ಆರಾಧನೆಯನ್ನು ನಮ್ಮ ಗುರುಗಳು ಮೊನ್ನೆ ಕಂಪ್ಲಿಯಲ್ಲಿ ಆಚರಿಸಿದ ವಿಷಯವನ್ನು ಕುರಿತು ನಡೆದಿರುವ ಚರ್ಚೆಯಲ್ಲಿ ನಾನೊಂದು ಕಮೆಂಟಿಗೆ ಪ್ರತ್ಯುತ್ತರ…
“ಕರೆದರೆ ಬರಬಾರದೆ ಅಂದ ತಕ್ಷಣ ಬಂದೇ ಬಿಡ್ತಾರೆ ಅಲ್ವೇನು ರಾಯರು” ಅನ್ನುತ್ತಲೇ ನಮ್ಮ ಪ್ರೀತಿಯ ಪಲಿಮಾರು ಶ್ರೀಗಳು ಶ್ರೀರಾಯರ ಅಭಿಷೇಕಕ್ಕೆ ಅಣಿಯಾದರು ಇಂದು ಬೆಳಿಗ್ಗೆ.
ಇತಿಹಾಸದ ಅಧ್ಯಯನ ಮಾಡುವವರಿಗೆ ಮಾಧ್ವಸಮೂಹವು ಎರಡು ಅವಳಿಜವಳಿ ದೀಪಗಳನ್ನು ಕೊಡುಗೆಯಾಗಿ ಕೊಟ್ಟಿತ್ತು. ಈ ದೀಪಗಳ ಬೆಳಕಿನಲ್ಲಿ ಅನೇಕ ಮಂದಿ ಆಸಕ್ತರು ಇತಿಹಾಸವನ್ನು ಅಧ್ಯಯನ ಮಾಡಿ ಯಶಸ್ಸನ್ನು ಪಡೆದಿದ್ದಾರೆ. ಈ ಎರಡು ದೀಪಗಳ ಹೆಸರೂ ಶ್ರೀನಿವಾಸ ಎಂದೇ. ಮೊದಲನೆಯ ದೀಪವು ಹಾವನೂರಿನಿಂದ ಎಣ್ಣೆಯನ್ನು ಪಡೆಯುತ್ತಿತ್ತು. ಎರಡನೆಯದ್ದು ಹೊಸರಿತ್ತಿಯಿಂದ. ಮೊದಲನೆಯ ದೀಪವು ಶಾಂತವಾಗಿ ಹಲವು ವರ್ಷಗಳೇ ಕಳೆದಿವೆ. ಈ ದಿನದಂದು ಎರಡನೆಯ ದೀಪವು ಕೂಡ ನಂದಿಹೋಗಿದೆ!
ಈ ನಾಲ್ಕಾರು ದಿನಗಳಿಂದ ನಮ್ಮಲ್ಲಿ ವಿಪರೀತವಾದ ಮಳೆ ಶುರುವಾಗಿದೆ. ಬಹಳ ಜೋರಾಗಿದೆ ಆರ್ಭಟ. ಈ ಆರ್ಭಟವನ್ನು ನೋಡಿ ಮನಸ್ಸಿನಲ್ಲಿ ಒಂದು ಪ್ರಶ್ನೆ ಬಂದಿತು. ಏನಿದು? ಈ ಉಡುಪಿಯ ಜನ ಹೇಳುವಂತೆ ಆಟಿಯ ಮಳೆ ಶುರುವಾಗಬೇಕಿತ್ತು. ಆದರೆ ಅತ್ಯಂತ ರಭಸವಾಗಿದೆಯಲ್ಲ ಮಳೆ! ಏನಿದರ ಕಾರಣ ಎಂಬುದು ಆ ಪ್ರಶ್ನೆ. ಉತ್ತರವಿಲ್ಲದೆ ನಿನ್ನೆಯ ದಿನವು ಕೊನೆಗೊಂಡಿತು.
ಇಂದು ಮಧ್ಯಾಹ್ನ ಎ.ಎನ್.ಐ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಒಂದು ಸುದ್ದಿಯನ್ನು ಉಲಿದಿದೆ. ಅಧಿಕೃತ ವರದಿಗಳ ಪ್ರಕಾರ ಡೆಹ್ರಾಡೂನ್, ಟೆಹ್ರಿ, ಪೌಡಿ ಮತ್ತು ನೈನಿತಾಲ್ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯ ಸುರಿಯುವ ನಿರೀಕ್ಷೆ ಇದೆ. ಎಂದು. ಈಗ ಅಲ್ಲಿ ಮಳೆ ಬಂದರೂ ಕೂಡ, ಯಾತ್ರಿಕರಿಗೆ ಯಾವುದೇ ತೊಂದರೆಯಾಗದಿರಲಿ ಎಂದು ಪ್ರಾರ್ಥಿಸೋಣ. ನೈಸರ್ಗಿಕ ಆಕಸ್ಮಿಕಗಳ ಸಂದರ್ಭಗಳಲ್ಲಿ ಯಾತ್ರಿಕರು ಮೊದಲು ಕೈಗೊಳ್ಳಬೇಕಾದ ಕ್ರಮಗಳನ್ನು ಇಲ್ಲಿ ಕೊಟ್ಟಿದೆ. ಯಾತ್ರೆಯ ಇಚ್ಛೆಯುಳ್ಳವರು ಇದನ್ನು ಓದಿಕೊಳ್ಳುವುದು ಉತ್ತಮ.
ಇಷ್ಟೆಲ್ಲಾ ವ್ಯವಹಾರ ನಡೆಯುವ ಈ ನಗರದ ಹಿಂದೆ ಯಾವ ಮನೆಮುರುಕರ ತಂತ್ರಗಾರಿಕೆಯೂ ಇಲ್ಲ. ಇಲ್ಲಿ ಉಸಿರಾಡುವ ಯಾವ ಜೀವಿಯೂ ಆಧುನಿಕ ಎಂಬಿಯೇ ಮತ್ತಿತರ ಹಣಮಾಡುವ ಡಿಗ್ರಿಯನ್ನು ಪಡೆದಿಲ್ಲ. ಯಾವ ಗಂಡಸೂ ಟೈ ಹಾಕಿಕೊಂಡಿಲ್ಲ, ಯಾವ ಹುಡುಗಿಯೂ ಲೋಗೋ ಇರುವ, ಮೈ ಬಿಗಿವ ಬಟ್ಟೆಯನ್ನು ಧರಿಸಿಲ್ಲ! ಯಾರ ಮುಖವೂ ಅಸಹಜವಾದ ಪೌಡರು, ತುಟಿರಂಗುಗಳನ್ನು ಬಳಿದುಕೊಂಡಿಲ್ಲ! ಯಾರ ಮುಖವನ್ನು ನೋಡಿದರೂ ಅದು ಕಷ್ಟವನ್ನು ಎತ್ತಿ ತೋರಿಸುವ ಬೆವರಿನಿಂದಲೇ ಕೂಡಿದೆ! ವಿನಯಭರಿತವಾಗಿಯೇ ಗಂಟಲಿಗೆ ಗಾಳ ಹಾಕುವ ಸೃಗಾಲ ನೀತಿಗೆ ಇಲ್ಲಿ ತಾವಿಲ್ಲ! ಇಲ್ಲಿರುವುದು ಏನಿದ್ದರೂ ಏರುಧ್ವನಿಯ, ಜೋರು ಮಾತಿನ ಪ್ರಾಮಾಣಿಕತೆ ಮಾತ್ರ. ಬೇಕಿದ್ದರೆ ತೊಗೋ ಇಲ್ಲದಿದ್ದರೆ ಇಲ್ಲ ಎನ್ನುವ ನೇರವಂತಿಕೆ ಮಾತ್ರ.