ಗುರಣ್ಣ ಅವರು ಶ್ರೀಗುರುಗಳ, ಮುಖ್ಯಪ್ರಾಣರ ಮತ್ತು ಶ್ರೀಕೃಷ್ಣದೇವರ ಕೃಪೆಗೆ ಪಾತ್ರರಾದವರು. ಸಾಕಷ್ಟು ಸಂಪತ್ತನ್ನೂ ಮತ್ತು ಮನಸಾರೆಯಾಗಿ ಆ ಸಂಪತ್ತನ್ನು ದಾನ ಮಾಡುವ ಉದಾರ ಹೃದಯವನ್ನೂ ಅವರಿಗೆ ದಯಪಾಲಿಸಿದ್ದಾರೆ ಹರಿವಾಯುಗುರುಗಳು. ಆದರೂ ಚೂರೂ ಅಹಂಕಾರವನ್ನು ಬೆಳೆಸಿಕೊಳ್ಳದೆ ಎಲ್ಲರೊಂದಿಗೂ ಅಣ್ಣ ಅಣ್ಣ ಎಂದೇ ಮಾತನಾಡಿಸುವ ಸಜ್ಜನ ಇವರು. ಇಂತಹ ಸೌಜನ್ಯ ಇರುವುದರಿಂದಲೇ ಏನೋ ಇವರ ಹಾಡು ಬಾಯಿಯಿಂದ ಬರದೆ, ಹೃದಯದಿಂದ ಹೊರಬರುತ್ತದೆ.
eeshavasyam Posts
ಆದರೆ ಹುಲಿಯ ವಿಷಯ ಹಾಗಲ್ಲ! ಅದರ ಶಕ್ತಿಯು ಅಪಾರ. ಆದರೂ ಅದು ಸಂಕೋಚದ ಜೀವಿ. ದಟ್ಟ ಕಾಡಿನ ಮಧ್ಯವೇ ಅದರ ವಾಸ. ಅತ್ಯಗತ್ಯವಿಲ್ಲದೆ ಅದು ಇತರರೆಡೆ ಬಾರದು. ಸಿಂಹದಂತೆ ತನ್ನ ಗುಂಪಿನ ಇನ್ನಿತರ ಮೇಲೆ ಆಹಾರಕ್ಕಾಗಿ ಅವಲಂಬನೆಯನ್ನೂ ಅದು ಮಾಡದು. ಕೋಪ ಬಂತೆಂದು ಸಲಗನಂತೆ ಬಂಡಾಯದ ವಿಧ್ವಂಸಕಾರ್ಯವನ್ನೂ ಮಾಡದು. ಕೆಲಸ ಮುಗಿದ ನಂತರ ಮತ್ತೆ ತನ್ನ ವಾಸಸ್ಥಾನವನ್ನು ಸದ್ದಿಲ್ಲದಂತೆ ಸೇರಿಕೊಂಡು ಬಿಡುವುದು. ವಿನಾಕಾರಣ ಬೇರಯವರ ಮೇಲೆ ಎಂದೂ ಎರಗದು! ಆದರೆ ಅದರ ಎಲ್ಲೆಯನ್ನು ಪ್ರಶ್ನಿಸಿದಿರೋ! ಮುಂದಿನದನ್ನು ಓದಲು ನೀವು ಇರುವುದೇ ಇಲ್ಲ!
ಜಗತ್ತಿಗೆ ಜ್ಞಾನದ ರುಚಿಯನ್ನು ತೋರಿಸಿದ ಶ್ರೀವೇದವ್ಯಾಸದೇವರು ನೆಲೆಸಿರುವುದು ಹಿಮಾಲಯದ ಉತ್ತರ ಭಾಗದಲ್ಲಿ. ಹಿಮಪರ್ವತಗಳಿಂದ ಸುತ್ತುವರೆದ ಬೆಚ್ಚನೆಯ ತಪ್ಪಲಿನಲ್ಲಿ ಅವರ ಆಶ್ರಮವಿದೆ. ಬದರಿಕಾಶ್ರಮ ಎನ್ನುವುದು ಅವರ ಆಶ್ರಮದ ಹೆಸರು. ಈ ಬದರಿಕಾಶ್ರಮವು ಇರುವ ಪ್ರದೇಶ ಬಹು ರಮಣೀಯವಾಗಿದೆ. ಇದಕ್ಕೆ ಶಮ್ಯಾಪ್ರಾಸವೆನ್ನುವ ಮುದ್ದಾದ ಹೆಸರು ಇದೆ
ನೀ ಕರುಣದಿಂದ ಪಾಲಿಸದೆ ಇದ್ದರೆ ಇನ್ನುನಾಕಾಣೆ ಮನ್ನಿಸುವರ ಸಾಕಾರಿ ರೂಪ ಸರ್ವೋತ್ತಮನೆ ಸಲಹೊ ಪರಾಕು ಮಾಡದೆ ಎನ್ನನು ಗುರುಹಿರಿಯರನು ಕಂಡು…
ಹರಿಪಾದವಿರಲಿಕೆ ಪರದೈವಂಗಳಿಗೆ ಎರಗಲೇಕೆ? ವರಮಾಣಿಕವಿದ್ದು ಎರವಿನ ಒಡವೆಯ ಬಯಸಲೇಕೆ? ಪೆತ್ತ ಪಿತನ ಮಾತು ಕಿವಿಯಲಿ ಕೇಳದ ಪುತ್ರನೇಕೆ? ಚಿತ್ತಪಲ್ಲಟವಾಗಿ ತಿರುಗುವ…
ಶ್ರೀಕೃಷ್ಣದೇವರ ಪಂಚಾಮೃತಕ್ಕೆ ನರ್ಮದೆಯೇ ಹಾಲುಕೊಡುವವಳು. ದುರ್ದೈವದ ಗಳಿಗೆಯೊಂದರಲ್ಲಿ ಹುಲಿಯೊಂದು ನರ್ಮದೆಯನ್ನು ತಿಂದುಬಿಟ್ಟಿತು. ಇದನ್ನು ತಿಳಿದ ಶ್ರೀರಘುಪ್ರವೀರತೀರ್ಥರ ಹೃದಯವು ತೀವ್ರವಾಗಿ ನೊಂದಿತು. ವ್ಯಥೆಗೊಂಡ ಅವರು ಪದ್ಮಾಸನದಲ್ಲಿ ಕುಳಿತುಬಿಟ್ಟರು. ಮಧ್ಯಾಹ್ನವಾದರೂ ಪೂಜೆಗೆ ಏಳಲಿಲ್ಲ. ಮಠದ ಸಿಬ್ಬಂದಿಗಳು ಚಿಂತಿತರಾದರು. ಇತ್ತ ಮಠದ ಹೊರಗೆ ವಿಲಕ್ಷಣವಾದ ಘಟನೆಯೊಂದು ನಡೆಯಿತು.
ಉರಿಗಂಜೆ ಸಿರಿಗಂಜೆ ಶರಧಿಯ ಭಯಕಂಜೆ ಹಾವಿಗಂಜೆ ಕತ್ತಿಯ ಧಾರೆಗಂಜೆ ಒಂದಕಂಜುವೆ, ಒಂದಕಳುಕುವೆ ಈ ಪರಧನ, ಪರಸತಿ ಎರಡಕ್ಕೆ ಹಿಂದೆ ಮಾಡಿದ…
ಮುನ್ನಡೆವಾಗ ಮನಸ್ಸಿನಲ್ಲಿ ಒಂದು ಪ್ರಶ್ನೆಯ ಚೂರು ಕಾಣಿಸಿಕೊಂಡಿತು. “ಇಲ್ಲಿರುವುದು ಶಿವಲಿಂಗ ಒಂದೇ ಒಂದು. ಈ ಪಂಚಮುಖದ ಶಿವಧ್ಯಾನಶ್ಲೋಕವು ಸರಿಹೊಂದುವುದೇ ಎಂದು.” ನಾನು ಈ ಪರ್ವತದ ಮೇಲೆ ಹೇಳಿಕೊಂಡ ಈ ಶ್ಲೋಕವು ಸ-ಮಂಜ-ಸವೇ ಆಗಿದೆ ಎಂದು ತುಂಗನಾಥನು ತೋರಿಸಿಕೊಟ್ಟ. ಆದರೆ ಈ ಜಾಗದಲ್ಲಿ ಅಲ್ಲ. ಚಂದ್ರಶಿಲಾ ಕೋಡುಗಲ್ಲಿನ ಬಳಿ.