ಶುಕಾಚಾರ್ಯರಿಂದಲೇ ಮೊಟ್ಟಮೊದಲ ಭಾಗವತ ಸಪ್ತಾಹವು ನಡೆದ ಕ್ಷೇತ್ರಕ್ಕೆ ಈಗ ಶುಕಸ್ಥಲ ಎಂದೇ ಹೆಸರು. ಇದು ಇಂದಿನ ಉತ್ತರಪ್ರದೇಶದಲ್ಲಿದೆ. ದೆಹಲಿಯಿಂದ ಹರಿದ್ವಾರಕ್ಕೆ ಹೋಗುವಾಗ ಮುಜಫ್ಫರಪುರ ಎಂಬ ಜಿಲ್ಲಾ ಕೆಂದ್ರವು ಸಿಗುತ್ತದೆ. ಶುಕಸ್ಥಲವು ಈ ಜಿಲ್ಲೆಗೆ ಸೇರಿರುವ ಒಂದು ಪಟ್ಟಣ. ಹರಿದ್ವಾರದಿಂದ ದಕ್ಷಿಣಕ್ಕೆ ಸುಮಾರು 90 ಕಿ.ಮೀ ದೂರದಲ್ಲಿ ಈ ಊರು ಇದೆ. ಉತ್ತರದವರು ಇದಕ್ಕೆ ಶುಕ್ರತಾಲ್ ಎಂದು ಕರೆಯುತ್ತಾರೆ.
eeshavasyam Posts
ಶ್ರೀಜಿತಾಮಿತ್ರತೀರ್ಥರ ಸನ್ನಿಧಾನದಲ್ಲಿ ಶ್ರೀಸುಶಮೀಂದ್ರತೀರ್ಥರು ಸೂಕ್ಷ್ಮವಾಗಿ ತೋರಿಸಿದ ತಮ್ಮ ಜ್ಞಾನದ ಒಂದು ಚಿಕ್ಕ ಘಟನೆ ಇದು. ಹಿಂದೊಮ್ಮೆ ಅವರು ನೆಲ್ಲಿ ಮರದ ಕಾಂಡವನ್ನು ಬಾವಿಯಲ್ಲಿ ಹಾಕಿಸಿದ ಘಟನೆಯನ್ನು ನೀವೆಲ್ಲ ಓದಿರಬಹುದು. ಇದು ಕೂಡ ಅವರ ಔಷಧೀಯ ಜ್ಞಾನದ ಬಗ್ಗೆಯೇ ಇರುವ ಮತ್ತೊಂದು ಲೇಖನ.
ಶ್ರೀದಾಸರು ತಮ್ಮೊಳಗಿರುವ ಎಲ್ಲ ದುಗುಡಗಳನ್ನು ಹೊರಹೊಮ್ಮಿಸಿ, ಶ್ರೀಶ್ರೀನಿವಾಸನನ್ನು ಬಗೆಬಗೆಯಾಗಿ ಕೇಳುವ ಒಂದು ಕೃತಿಯುಂಟು. ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸ ಎಂಬುದು. ಅದನ್ನೇ ನಮ್ಮ ಗುರಣ್ಣನವರು ಇಲ್ಲಿ ಹಾಡಿರುವುದು. ಬಹಳ ಚೆನ್ನಾಗಿ ಅದನ್ನು ಅನುಭವಿಸುತ್ತಾ ಹಾಡಿದ್ದಾರೆ. ಹಾಡು ಕೇಳಿ ಸಂತೋಷವಾದಲ್ಲಿ ಮುಂದೆ ಸಂಪೂರ್ಣವಾಗಿ ಅದನ್ನು ಕಲಿಯಲು ಇಲ್ಲಿ ಕೆಳಗೆ ಸಾಹಿತ್ಯವನ್ನು ನೀಡಿದ್ದೇನೆ. ಕಲಿಯಬಹುದು.
ಇಂದು ಗುರುಗಳ ೬೫ನೆಯ ಜನ್ಮನಕ್ಷತ್ರ. ಇವರು ನನಗೆ ರಾಯರೇ ಕೊಟ್ಟಿರುವ ಕರದೀಪ. ಈ ದೀಪದ ಬೆಳಕಿನಲ್ಲಿ ನನ್ನ ಜೀವನ ನಡೆಯುತ್ತಿದೆ. ದೀಪದ ಬೆಳಕು ಇನ್ನೂ ನೂರಾರು ವರ್ಷಗಳ ಕಾಲ ಹಬ್ಬಿಯೇ ಇರಲಿ ಎಂದು ಆಶಿಸುತ್ತಾ ಅದೇ ಬೆಳಕಿನಲ್ಲಿಯೇ ಬರೆದ ಒಂದು ನುಡಿ ನಮನವಿದು. ಅವರ ಅಂತರ್ಯಾಮಿಯಾದ ಶ್ರೀರಾಯರು, ಶ್ರೀಹನುಮ ಮತ್ತು ಶ್ರೀರಾಮನಿಗೆ ಪ್ರಿಯವಾಗಲಿ.
ಅವರ ಮಾತು ಶಾಪ ಮತ್ತು ಅನುಗ್ರಹ ಎರಡೂ ರೀತಿಯಲ್ಲಿ ವರ್ತಿಸಬಲ್ಲದು ಎಂಬ ಅರಿವಿದ್ದ ಅಧಿಕಾರಿಗಳು ಮುಚ್ಚಿದ್ದ ಬಾವಿಯನ್ನು ಎರಡೇ ದಿನಗಳಲ್ಲಿ ತೆಗೆಸಿದರು. ಸುಮಾರು 25 ಅಡಿಗಳಷ್ಟು ಶುದ್ಧವಾದ ನೀರು ಆ ಬಾವಿಯಲ್ಲಿ ಕೆಲವೇ ಗಂಟೆಗಳಲ್ಲಿ ತುಂಬಿಕೊಂಡಿತು.
ಇವರು ಹೀಗೆ ಎಚ್ಚರದಪ್ಪಿ ಬಿದ್ದಿದ್ದಾಗ ಹತ್ತಿರವಿದ್ದ ಗೋರಿಗಳಿಂದ ಕೆಲವು ದೆವ್ವಗಳು ಎದ್ದು ಬಂದು ಇವರ ರಕ್ತವನ್ನು ಹೀರಲು ಪ್ರಯತ್ನಿಸಿವೆ. ಆದರೆ ಅವರ ದಾಳಿಗೆ ಸಿಕ್ಕಿದ್ದು ಕೇವಲ ಜಾಹ್ನವಿ ಮಾತ್ರವೇ. ಚೂರೇ ಚೂರು ತೆರೆದಿದ್ದ ಕಿಟಕಿಯ ಮೂಲಕ ಅವಳ ಕೈಯನ್ನೆಳೆದು ಆ ದೆವ್ವಗಳು ಕಚ್ಚಿ ಕಚ್ಚಿ ಎಳೆದಾಡಿವೆ. ಧೈರ್ಯವನ್ನು ಒಟ್ಟುಗೂಡಿಸಿಕೊಂಡ ಆಕೆ ತನ್ನ ಧೈರ್ಯವನ್ನು ಒಟ್ಟುಗೂಡಿಸಿಕೊಂಡು ಹೋರಾಟನಡೆಸಿ, ಅವುಗಳ ಕೈಗಳನ್ನು ಕಿಟಕಿಯಿಂದಾಚೆಗೆ ನೂಕಿ, ಗಾಜನ್ನು ಏರಿಸಿಕೊಂಡಳು. ಆದರೆ ಅಷ್ಟು ಹೊತ್ತಿಗೆ ಆಗಬೇಕಾಗಿದ್ದ ಅನಾಹುತವು ಆಗಿಯೇ ಹೋಗಿತ್ತು.
ಮಡಿವಂತಿಕೆಯ ಹುಚ್ಚನ್ನು ಹಿಡಿಸಿಕೊಂಡ ಜನರು ಮಾಡುವ ತಪ್ಪು ಆಚರಣೆಗಳನ್ನು ನೋಡಿ ಶಾಸ್ತ್ರವೇ ಔಟ್ ಡೇಟೆಡ್ ಎನ್ನುವ ವಿಪರೀತದ ನಿರ್ಧಾರಕ್ಕೆ ಬರುವುದು ತಪ್ಪು. ಮನುಷ್ಯತ್ವವನ್ನು ಬಿಟ್ಟು ವ್ಯವಹರಿಸು ಎಂದು ಶಾಸ್ತ್ರಗಳು ಎಂದೂ ಹೇಳಿಲ್ಲ. ಹಾಗೆ ಹೇಳಿದ್ದೇ ಆದರೆ ರಾಯರು ಸರಸ್ವತೀದೇವಿಗೆ ಪಿಶಾಚಜನ್ಮದಿಂದ ಮುಕ್ತಿಗೊಳಿಸುವುದಾಗಲಿ, ಶ್ರೀವಾದಿರಾಜರು ವಿಧವಾ ಸ್ತ್ರೀಯಳ ಬಗ್ಗೆ ಅನುಕಂಪದ ಮಾತನ್ನಾಗಲಿ, ವಿಜಯದಾಸರು ಸಾಯುತ್ತಿದ್ದ ಕತ್ತೆಗೆ ನೀರು ಕುಡಿಸುವುದಾಗಲಿ ಮಾಡುತ್ತಿದ್ದಿಲ್ಲ. ಅಲ್ಲವೇ.
ಕರಣಿಕರ ಎದೆ ಝಲ್ಲೆಂದಿತು. ಸ್ವಾಮೀ !! ನಿನ್ನ ಇಚ್ಛೆ ಇಲ್ಲಿಯೇ ಇರಬೇಕೆಂದು ಇದೆಯೇ? ಎಂದು ಪ್ರಾರ್ಥಿಸಿ ನನ್ನ ಅನುಚರರ ಅರೋಗ್ಯ ಸರಿಮಾಡು ಪುನಃ ಸ್ವಸ್ಥಾನಕ್ಕೆ ಸೇರಿಸಿ ಬರುವೆ ಎಂದು ಬೇಡಿಕೊಂಡ !! ಅನುಚರರ ಕಣ್ಣು ಕಾಣತೊಡಗಿದವು. ಆದರೆ ಮಾರುತಿಯರಾಯ ಒಂದು ಇಂಚೂ ಅಲುಗುತ್ತಿಲ್ಲ. !!! ಪುನಃ ಬೇಡಿಕೊಂಡ ಕರಣಿಕ.. ಸ್ವಾಮಿಯ ವಿಗ್ರಹದಿಂದ ಭವ್ಯ ಬೆಳಕು ಗೋಚರವಾಯಿತು
ಮಾರನೆಯ ದಿನ ಬೆಳಿಗ್ಗೆ ಬಾಳೆಯ ನಾರಿನಲ್ಲಿ ಸುತ್ತಿದ ನಾಲ್ಕಾರು ಹೋಳಿಗೆಗಳು ಶಿಬರೂರಿನ ತಂತ್ರಿಗಳ ಅಡುಗೆ ಕೋಣೆಯನ್ನು ತಲುಪಿದವು. ಕೊಟ್ಟಾರಿಗಳಿಗೂ ಏನೋ ಸಂತೋಷ, ಈ ಕೆಲಸ ಮಾಡಲು. ಆ ದಿನ ಮಧ್ಯಾಹ್ನ ವೈಶ್ವಾನರನ ಆರಾಧನೆ ಮುಗಿದ ನಂತರ ಕುಲಪತಿಗಳಿಗೆ ಈ ವಿಷಯ ತಿಳಿದು ಹೃದಯ ಅರಳಿತು.